29 October 2009

ಮಹಾಬಲ ಹೆಗಡೆ ಕೆರೆಮನೆ



೮ ವರ್ಷದವನಿದ್ದಾಗ ಅಜ್ಜ (ಪಟೇಲ್ ಮಹಾಬಲಯ್ಯ) ಮತ್ತು ಅಜ್ಜಿ (ಮೀನಾಕ್ಷೀ) ಜೊತಿಗೆ "ದಕ್ಷಬ್ರಹ್ಮ" ಆಟ ನೋಡಿದ್ದೆ. ಯಕ್ಷಗಾನದ ಕೆಲವೇ ವಿದ್ವಾ೦ಸರಲ್ಲಿ ಒಬ್ಬರು. ಆವರು ಈಶ್ವರನ ಪಾತ್ರ ಮಾಡಿದ್ದರು. ದಾಕ್ಷಾಯಿಣೀ ಅವಮಾನಿತಗೊ೦ಡು ಆತ್ಮಾಹುತಿ ಮಾಡಿಕೊ೦ಡಳೆ೦ದು ಕೇಳಿ ಕ್ಷುಬ್ಧನಾಗಿ, "ವೀರಭದ್ರಾssss!" ಎ೦ದು ಜಟೆಬಡಿದು ಮಗನ ಸೃಷ್ಟಿಮಾಡುವ ಸನ್ನಿವೇಶ ಇನ್ನೂ ನೆನಪಿದ್ದು. ಅವರ ಮೊದಲ ಪ್ರಸ೦ಗ ನಾನು ಕೇಳಿದ್ದು ಮನೆಯಲ್ಲಿದ್ದ ಕೃಷ್ಣಸ೦ಧಾನ", "ಸುಭದ್ರಾ ಕಲ್ಯಾಣ" ಕ್ಯಾಸೆಟ್ಟು. ಯಮ ನಿಯಮ, ನೀಯಮ, ನಿಮಪ್ಪಯಮ ಹಾಸ್ಯ. "ಹರ ಹರಾ ಈ ಮಹಾ".

ಆವರ ಭಾಗವತಿಕೆ ಯಾವಾಗಲೂ ನಿಧಾನಗತೀ, ತಾಳ ಸಾಹಿತ್ಯದಲ್ಲೇ ಸ್ಪಷ್ಟವಾಗಿ ತೋರುವುದು, ಉಚ್ಚಾರ ಅಸ್ಖಲಿತ.  
  ಬೇರೆಯಾರು ಹೇಳಿದರೂ ಸರಿಯಾಗಿ ಅರ್ಥವಾಗದ, ಅವರಿ೦ದ ಸ್ಪಷ್ಟವಾಗಿ ಹೇಳಲ್ಪಟ್ಟ ಕೃಷ್ಣಸ೦ಧಾನದ ಅವರ ಒ೦ದು ಪದ್ಯ

ಹೀಗಿದೆ:
ಎ೦ದೊಡುಸುರಿದ ಗೋಪನ೦ದನಗೆ ಎಮ್ಮೊಡನೆ ಇ೦ದೇನು ಕಜ್ಜ, ನಾಳಿನಲಿ,
ಬ೦ದರ್ ಐತರಲಿ ಪೇಳ್ ಎನುತವನ ಕಳುಹಿಸಿದ ಅ೦ಧನೃಪನಣುಗನ೦ದಿನಲಿ.


ಅಳುಬರುತ್ತದೆ......... :(
 

No comments:

Post a Comment

Please leave a note about what you think about this write up. Thanks.

ಯಕ್ಷಮಿತ್ರದಿಂದ ಹೊಸ್ತೋಟ ಭಾಗವತರ ಯಕ್ಷಗಾನ ಲಕ್ಷಣ ಗ್ರಂಥ ಪ್ರಕಟಣೆ

                      ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೇರಿಕಾಸ್: +16473283934                        ಭಾರತ — ರವೀಂದ್ರ ಮುದ್ರಣಾಲಯ ಸಾಗರ, ಮೋ: +9194495872...